Tuesday, March 1, 2011

ಇದೆ ಸರಿ..!

ನಾವು ದೊಡ್ಡವರಾಗುತ್ತ ಹೋದಂತೆ ಅದೆಷ್ಟು ಸಂಕೀರ್ಣವಾಗುತ್ತಾ ಹೋಗ್ತಿವಲ್ಲವಾ?
ಪ್ರತಿಯೊಂದನ್ನೂ ಲೆಕ್ಕಾಚಾರ ಹಾಕೆ ತೂಗುತ್ತೆವಲ್ಲವಾ..? ನಮ್ಮ ಪಕ್ಕದಲ್ಲೇ ಜೊತೆ ಜೊತೆಗೆ ಬದುಕುವವರ ಮೇಲೆ ಸಾವಿರ ಸಂಶಯಗಳು..ತುತ್ತು ಹಂಚಿಕೊಳ್ಳುವವರ ಎದುರಲ್ಲೇ ನೂರೆಂಟು ಸುಳ್ಳುಗಳು...
ಸಣ್ಣ ಹಸುಳೆ, ಏನೂ ಗೊತ್ತಿಲ್ಲದ ಕಂದಮ್ಮ ಇದನ್ನೆಲ್ಲಾ ನೋಡಿಯೇ ಹೆಜ್ಜೆ ಕಲಿಯೋದು..ಎಡವೋದು..ಮುಗ್ಗರಿಸಿ ಬಿದ್ದು ಮತ್ತೆದ್ದು ಮುಗ್ದತೆಯನ್ನ ಕಳಕೊಂಡು ದೊಡ್ದವನಾಗೋದು.. ಜಗತ್ತಿನ ಎಲ್ಲ ಬೂಟಾಟಿಕೆ ನಾಟಕ ತಿಳಿದಾಗಲೇ ನಮಗೆ ನಮ್ಮ ಬಾಲ್ಯ ನೆನಪಾಗೊದಲ್ಲವಾ?

....ನಿಜ...ಆ ಮುಗ್ದಾತಿ ಮುಗ್ದ ಬಾಲ್ಯ ಯಾಕಾದರೂ ಕಳೆದು ಹೋಯ್ತೋ ಅನ್ನೋ ಸಂಕಟ.. ನಮ್ಮ ಮನಸ್ಸಿಗೆ ನೋವಾದಾಗಲೆಲ್ಲ ಇಂತದ್ದೊಂದು ಸಂಕಟ ಕಾಡುತ್ತದೆ. ಏನೇನು ಕೊಳಚೆ ಮನಸಲ್ಲಿರದ ಆ ಬಾಲ್ಯ ಮತ್ಯಾಕೆ ಬರೋದಿಲ್ಲ ಅನಿಸುತ್ತದೆ. 

ಒಮ್ಮೆ ಯಾವುದೋ ಪುಸ್ತಕದಲ್ಲಿ ಓದಿದ ನೆನಪು - ೨೦ರ ಹುಡುಗನೊಬ್ಬ ಅಂದುಕೊಳ್ಳುತ್ತಾನೆ- ನಾನು ಚಿಕ್ಕವನೆ ಇರಬೇಕಿತ್ತು , ಈಗ ದೊಡ್ದವನ್ನಗಿಬಿಟ್ಟೆ,ಅಮ್ಮ ಅಕ್ಕ ತಿಂಗಳಲ್ಲಿ ೩ ದಿನ ಹೊರಗೆ ಯಾಕೆ ಕೂರುತ್ತಾರೆ ಅನ್ನೋದೆಲ್ಲ ಅರ್ಥ ಆಗಿ, ಏನೋ ಒಂತರ ಅನಿಸುತ್ತೆ.ಏನು ಮಾಡ್ಲಿ? ಅಂತ. 

ನಿಜ...ಇವತ್ತು ಕೆಲಸ ಮಾಡೋ ಜಾಗದಲ್ಲಿ ನೂರಾರು ಜನ ಬೆನ್ನ ಹಿಂದೆ ಮಾತಾಡುತ್ತಾರೆ. ಕಾಲೆಳೆಯಲು ಕಾದು ನಿಂತಿರ್ತಾರೆ. ಎಂತೆಂತ ಅತಿರಥ ಮಹಾರಥರು ಬೆನ್ನ ಹಿಂದೆ ಕಾಣದೆ ಸೋತು ಹೋದರಲ್ವಾ? ಅವರೆಲ್ಲರೂ ತಮ್ಮ ಚಿಕ್ಕಂದಿನ ದಿನಗಳನ್ನ ನೆನೆಸಿಕೊಂಡಿರಬೇಕು..ಕಳೆದ ಬಾಲ್ಯದ ನೆನಪಿಗೆ ಮರ ಮರ ಮರುಗಿರಬೇಕು...ಎಷ್ಟೇ ಮರುಗಿದರೂ ಕಳೆದ ಮುಗ್ದತೆಯ ಆ  ದಿನ ಮತ್ತೆ ಬರೋದಿಲ್ಲ ಅನ್ನೋ ಸತ್ಯಕ್ಕೆ ತಲೆ ಬಾಗಿ ಹೊರಟು ನಿಂತಿರಬೇಕು...

ನಾವೂ ಹಾಗೆ ಮಾಡದೆ ವಿಧಿ ಇಲ್ಲ... ಕಳೆದ ನೆನಪುಗಳು ಸಿಹಿಯಾಗೆ ಇದ್ದವು ಅಂತ ಸಮಾಧಾನ ಪಟ್ಟುಕೊಂಡು ಮುಂದಿನ ಕೆಲಸಗಳನ್ನ ಮುಗಿಸಬೇಕು.. ಅದೇ ನ್ಯಾಯ...!!

2 comments: